ಪ್ರೇಯಸಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ ಸಾವು | ಜನತಾ ನ್ಯೂಸ್
ಶಿವಮೊಗ್ಗ : ಬೇರೆಯವನನ್ನು ಪ್ರೀತಿಸಿದಳು ಎಂಬ ಕಾರಣಕ್ಕೆ ಪ್ರೇಯಸಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದಾನೆ.
ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ನ, ನರ್ಸಿಂಗ್ ವಿದ್ಯಾರ್ಥಿನಿ ಕವಿತಾ (21) ಹಾಸ್ಟೇಲ್ ನಿಂದ ನಾಪತ್ತೆಯಾಗಿದ್ದು, ನಿನ್ನೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಬಾಳೆಕೊಡ್ಲು ಕಾಡಿನ ಪರಿಸರದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಕಳೆದ ಏಳು ವರ್ಷದಿಂದ ನೀನೇ ನನ್ನ ಜೀವ ಅಂತಾ ಪ್ರೀತಿ ಮಾಡುತ್ತಿದ್ದ ಯುವಕ ಶಿವಮೂರ್ತಿ. ಮೊನ್ನೆ ಕವಿತಾಳನ್ನು ಶಿವಮೊಗ್ಗದಿಂದ ಪುಸಲಾಯಿಸಿ ತನ್ನ ಊರು ಸಮೀಪದ ಕಾಡಿಗೆ ಕರೆದುಕೊಂಡು ಹೋಗಿದ್ದನು. ಈತನ ಪ್ರೀತಿಯನ್ನು ನಿರಾಕರಣೆ ಮಾಡಿದ್ದ ಪ್ರೇಯಸಿ ವಿರುದ್ಧ ಪ್ರೀಯಕರ ತಿರುಗಿ ಬಿದ್ದಿದ್ದು. ಪ್ರೇಯಸಿಯ ಕತ್ತು ಹಿಸುಕಿ ಶಿವಮೂರ್ತಿ ಕೊಲೆ ಮಾಡಿದ್ದಾನೆ.
ಹೀಗೆ ಯುವತಿಯನ್ನು ಕೊಲೆ ಮಾಡಿದ ಪ್ರೀಯಕರ ಶಿವಮೂರ್ತಿ ಬಳಿಕ ಡೆತ್ ನೋಟ್ ಬರೆದಿಟ್ಟು ತಾನು ವಿಷ ಸೇವಿಸಿದ್ದಾನೆ. ಆದರೆ ಶಿವಮೂರ್ತಿಯನ್ನು ಅಲ್ಲಿನ ಸ್ಥಳೀಯರು ಕಂಡು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಶಿವಮೂರ್ತಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ನರ್ಸಿಂಗ್ ಕಾಲೇಜಿನಿಂದ ಕಾಣೆಯಾಗಿದ್ದಾಳೆ ಎಂದು ಕೊಲೆಯಾದ ಯುವತಿಯ ತಂದೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.